Slide
Slide
Slide
previous arrow
next arrow

ಕೆ.ಎಚ್.ಎಸ್.ನಿಧನಕ್ಕೆ ಅಶೋಕ್ ಭಟ್ ಸಂತಾಪ

300x250 AD

ಶಿವಮೊಗ್ಗ: ಮಾಜಿ ಸಚಿವ ಹಿರಿಯ ರಾಜಕಾರಣಿ, ಶಿಕ್ಷಣತಜ್ಞ  ಕೆ.ಎಚ್.ಶ್ರೀನಿವಾಸ್ (ಕೆಎಚ್ಎಸ್) ಅವರ ನಿಧನಕ್ಕೆ ಅಖಿಲ ಹವ್ಯಕ ಒಕ್ಕೂಟದ ಪ್ರಮುಖರಾದ, ಹಿರಿಯ ವಕೀಲ ಅಶೋಕ್ ಜಿ.ಭಟ್ ಕಂಬನಿ ಮಿಡಿದಿದ್ದಾರೆ.

ಕೆಎಚ್ಎಸ್  ಸೌಮ್ಯ ಸ್ವಭಾವದ  ಓರ್ವ ಶ್ರೇಷ್ಠ ರಾಜಕಾರಣಿಯಾಗಿದ್ದರು. ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಗುಣಗಳನ್ನು ಹೊಂದಿದ್ದರು. ತಾವು ರಾಜಕಾರಣದಲ್ಲಿ ಅನುಭವಿಸಿದ ಕಹಿ ಅನುಭವ ಹಾಗೂ ಪ್ರಸ್ತುತ ರಾಜಕಾರಣದ ಬಗ್ಗೆ ಸದಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ರಾಜಕೀಯ, ಶಿಕ್ಷಣ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿದ್ದರು. ಅವರ ಗಲಿಕೆಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗಿದೆ. ಅಖಿಲ ಹವ್ಯಕ ಒಕ್ಕೂಟದಲ್ಲಿ ಸಕ್ರಿಯವಾಗಿದ್ದ ಶ್ರೀನಿವಾಸ್ ತಮ್ಮ ಸಮುದಾಯದ ಅಭಿವೃದ್ಧಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಒಬ್ಬ ರೋಲ್ ಮಾಡೆಲ್ ಆಗಿದ್ದರು. ಇಂಥವರು ಇಂದು ಇಹಲೋಕ ತ್ಯಜಿಸಿದ್ದು ನಾಡಿಗೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ಗೈಯಲಿ ಎಂದು ಅಶೋಕ್ ಭಟ್ ಪ್ರಾರ್ಥಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top